ಶಿವಮೊಗ್ಗದ  ಮಲ್ನಾಡ್  ಕ್ಯಾನ್ಸರ್  ಆಸ್ಪತ್ರೆಯಲ್ಲಿ ಅಪರೂಪದ  ಯಶಸ್ವಿ  ಗಂಟಲು  ಕ್ಯಾನ್ಸರ್  ಶಸ್ತ್ರ ಚಿಕಿತ್ಸೆ

ಶಿವಮೊಗ್ಗ, ಜುಲೈ 2, 2025: ಗಂಟಲು  ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ  ಶಿಕಾರಿಪುರ ನಗರವಾಸಿಯಾದ 60 ವರ್ಷದ ಮಹಿಳೆಯು, ಈ ಹಿಂದೆ ರೇಡಿಯೇಶನ್ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ತಪಾಸಣೆ ಮಾಡಿದ ಸಂದರ್ಭದಲ್ಲಿ ಕ್ಯಾನ್ಸರ್ ಉಳಿದುಕೊಂಡಿದ್ದ ಕಾರಣ, ಒಂದು ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ಈ ಮಹಿಳೆಯನ್ನು ಸಂಪೂರ್ಣವಾಗಿ ಕ್ಯಾನ್ಸರ್ ನಿಂದ ಮುಕ್ತಮಾಡಲಾಗಿದೆ.

ಈ ಶಸ್ತ್ರ ಚಿಕಿತ್ಸೆಯು ದೇಶದ ಮೆಟ್ರೋ ನಗರಗಳಲ್ಲಿನ ಕೆಲವೇ ಕ್ಯಾನ್ಸರ್ ಆಸ್ಪತ್ರೆಗಳ ಮಟ್ಟದಲ್ಲಿ  ನಡೆಸುವಂತಹ   ಅತೀ ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದ್ದು, ಇದನ್ನು ನಮ್ಮ ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ನುರಿತ ಕ್ಯಾನ್ಸರ್ ತಜ್ಞ ವೈದ್ಯರಿಂದ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.

ಈ ಅಪರೂಪದ ಶಸ್ತ್ರ ಚಿಕಿತ್ಸೆ ಮೇ ತಿಂಗಳಲ್ಲಿ ನಡೆದಿದ್ದು, ಈ ಮಹಿಳೆಯ ಗಂಟಲು  ಭಾಗದಲ್ಲಿ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಂಡಂತಹ ನಾಳವನ್ನು ಸುಮಾರು 15 CM ನಷ್ಟು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಹಾಗೂ ಆ ತಗೆದು ಹಾಕಲಾದ ಗಂಟಲು  ನಾಳದ ಭಾಗಕ್ಕೆ ಸಣ್ಣ ಕರುಳಿನ ಭಾಗವನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಜೋಡಣೆ ಮಾಡಲಾಯಿತು. ಇದರಿಂದ ಸಂಪೂರ್ಣವಾಗಿ ಕ್ಯಾನ್ಸರ್  ಖಾಯಿಲೆಯು ಗುಣ ಹೊಂದಿರುವುದು ಕಂಡುಬಂದಿರುತ್ತದೆ  ಮತ್ತು ಈ ಮಹಿಳೆಯು ಎಂದಿನಂತೆ ಯಾವ ಅಡೆ ತಡೆಗಳು ಇಲ್ಲದೆ ಆಹಾರ ಸೇವನೆ ಮಾಡುತ್ತಿದ್ದು  ಹಾಗೂ ತನ್ನ ದಿನ ನಿತ್ಯದ ಚಟುವಟಿಕೆಗಳನ್ನು ಯಾವ ತೊಂದರೆ ಇಲ್ಲದಂತೆ ನಡೆಸುತ್ತಿರುವುದು ಸಂತೋಷದ ವಿಚಾರವಾಗಿದೆ.

ಈ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ  ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ   ನುರಿತ ಕ್ಯಾನ್ಸರ್ ತಜ್ಞ ವೈದ್ಯರುಗಳಾದ, ಡಾ. ದೀಪಕ್ ಹೆಚ್. ಎಲ್. – ಕ್ಯಾನ್ಸರ್ ಸರ್ಜನ್,  ಡಾ. ಚೇತನ್ – ಮೈಕ್ರೋ ವ್ಯಾಸ್ಕ್ಯೂಲರ್  ಸರ್ಜನ್, ಡಾ. ರೋಷನ್ ಬಿ. ಎ. ರಾವ್ – ಕ್ಯಾನ್ಸರ್ ಸರ್ಜನ್, ಡಾ. ಸಂದೇಶ್ –   ಜನರಲ್ ಸರ್ಜನ್ ಹಾಗೂ ಅರವಳಿಕೆ ತಜ್ಞರಾದ ಡಾ. ವಾದಿರಾಜ್ ಕುಲ್ಕರ್ಣಿ, ಡಾ. ಜಿ.ಎಲ್. ರವೀಂದ್ರ ತಂಡವು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *